Breaking News

ಪ್ರವಾಸಿಗರ ನೆಚ್ಚಿನ ತಾಣವಾದ ದೇವರ ಬೆಳಕೆರೆ ಡ್ಯಾಂ..!

ಸೌಂದರ್ಯ ಮೈದುಂಬಿಕೊಂಡಿದ್ದರೂ ಸಮಸ್ಯೆಗಳಿಗೇನೂ ಕಡಿಮೆ ಇಲ್ಲ......

SHARE......LIKE......COMMENT......

ದಾವಣಗೆರೆ:

ಇಲ್ಲಿದೆ ಸ್ವಚ್ಛಂದ ಪರಿಸರ. ತಣ್ಣನೆ ಗಾಳಿ, ಹರಿಯುವ ನೀರಿನ ಭೊರ್ಗರೆತ ಇವೆಲ್ಲಾ ವರ್ಣನೆಗೆ ಸಾಕ್ಷಿಯಂತೆ ಇರುವುದು ಈ ಡ್ಯಾಂ ಯೆಸ್ ಇದು ಜಿಲ್ಲೆಯ ಹರಿಹರ ತಾಲೂಕಿನ ದೇವರ ಬೆಳಕೆರೆ ಜಲಾಶಯ. ಇದು ಯಾವುದೇ ನದಿಗೆ ಅಡ್ಡಲಾಗಿ ಕಟ್ಟಿದ ಡ್ಯಾಂ ಅಲ್ಲ. ಶ್ಯಾಗಳೆ ಎಂಬ ಹೆಸರಿನ ಹಳ್ಳಕ್ಕೆ ಕಟ್ಟಲಾಗಿರುವ ಅಣೆಕಟ್ಟು…

ಈ ಜಲಾಶಯದಿಂದ ಹೊರಬರುವ ನೀರನ್ನು ನೋಡೋದೆ ಕಣ್ಣಿಗೆ ಚೆಂದ. ಅಷ್ಟು ಸೌಂದರ್ಯವನ್ನು ತನ್ನ ಒಡಲಲ್ಲಿ ತುಂಬಿಕೊಂಡಿದೆ ಜಲಾಶಯದ ಪರಿಸರ. ತುಂಗಾಭದ್ರಾ ನದಿ ತುಂಬಿದ ಬಳಿಕ ಈ ಹಳ್ಳಕ್ಕೆ ನೀರು ಬರುತ್ತದೆ. ಬರೋಬ್ಬರಿ ಎರಡು ದಶಕದ ಬಳಿಕ ಈ ಸೊಬಗು ಇಲ್ಲಿ ಸೃಷ್ಟಿಯಾಗಿರುವುದು ವಿಶೇಷ.

ಸೌಂದರ್ಯವನ್ನು ಮೈದುಂಬಿಕೊಂಡಿದ್ದರೂ ಇಲ್ಲಿ ಸಮಸ್ಯೆಗಳಿಗೇನೂ ಕಡಿಮೆ ಇಲ್ಲ.  ಕುಳಿತುಕೊಳ್ಳಲು ಆಸನಗಳಿಲ್ಲ. ಕುಡಿಯಲು ನೀರಿಲ್ಲ. ಶೌಚಾಲಯ ವ್ಯವಸ್ಥೆ ಕೂಡ ಇಲ್ಲ.ಪ್ರತಿನಿತ್ಯ ಈ ಡ್ಯಾಂ ಬಳಿ  ಪಕ್ಕದೂರುಗಳಿಂದ, ಬೇರೆ ಬೇರೆ ಜಿಲ್ಲೆಗಳಿಂದ ಪ್ರವಾಸಿಗರು ಬರುತ್ತಾರೆ. ಆದರೂ ಇಲ್ಲಿ ಮಾಹಿತಿಯುಳ್ಳ ಯಾವುದೇ ನಾಮಫಲಕ ಇಲ್ಲದಿರುವುದರಿಂದ ತೊಂದರೆ ಅನುಭವಿಸುತ್ತಿದ್ದಾರೆ.

ಇಲ್ಲಿನ ಸಮಸ್ಯೆಗಳು ಎಷ್ಟೇ ಇದ್ದರೂ ಪ್ರವಾಸಿಗರ ಸಂಖ್ಯೆ ಮಾತ್ರ ಕ್ಷೀಣಿಸಿಲ್ಲ. ವಿದ್ಯಾರ್ಥಿಗಳು, ನೌಕರರು ವೀಕೆಂಡ್​ನಲ್ಲಿ ಇಲ್ಲಿಗೆ ಆಗಮಿಸಿ ಪ್ರಕೃತಿ ಮಾತೆಯ ಮಡಿಲಲ್ಲಿ ತಮ್ಮ ಸಂತೋಷದ ಸಮಯವನ್ನು ಕಳೆಯುತ್ತಾರೆ….