Breaking News

ಮೋದಿ ವಿರುದ್ಧ ದೇವೇಗೌಡರ ಟೀಕೆ..!

ಪ್ರಧಾನಿ ಸ್ಥಾನದ ಗೌರವ ತಿಳಿದು ಸುಮ್ಮನಿದ್ದೇನೆ....

SHARE......LIKE......COMMENT......

ಶಿವಮೊಗ್ಗ:

ನಾನು ಎಂದಿಗೂ ಮೋದಿಯವರ ವಿರುದ್ಧ ಟೀಕೆ ಮಾಡಿಲ್ಲ. ಪ್ರಧಾನಿಯವರ ಸ್ಥಾನವನ್ನು ಎತ್ತಿ ಹಿಡಿಯಬೇಕು ಎಂಬ ಕಾರಣಕ್ಕೆ ಅನೇಕ ವಿಷಯಗಳನ್ನು ತಡೆದಿದ್ದೇನೆ ಎಂದು ಜೆಡಿಎಸ್​ ವರಿಷ್ಠ, ಮಾಜಿ ಪ್ರಧಾನಿ ದೇವೇಗೌಡರು ಹೇಳಿದರು.ನಗರದಲ್ಲಿ ನಡೆದ ಜಿಲ್ಲಾ ಒಕ್ಕಲಿಗರ ಸಮಾವೇಶದಲ್ಲಿ ಮಾತನಾಡಿದ ಅವರು, ನಾನು ನನ್ನ ಕೊನೆಯ ಘಟ್ಟಕ್ಕೆ ಬಂದಿದ್ದೇನೆ. ಮುಸ್ಲಿಂರನ್ನ ನೀವು ಎಲ್ಲಿಗೆ ಕಳುಹಿಸುತ್ತೀರಾ. ನಮ್ಮ ದೇಶದಲ್ಲಿ 43 ಕೋಟಿ ಮುಸ್ಲಿಂರು ವಾಸಿಸುತ್ತಿದ್ದಾರೆ. ಆದರೆ ಉತ್ತರ ಭಾರತ, ಕಾಶ್ಮೀರದಲ್ಲಿ ಏನು ನಡೆಯುತ್ತಿದೆ. ಒಂದು ಸಮಾಜದ ಹೆಸರಿನಲ್ಲಿ ಅಶಾಂತಿಯನ್ನ ಸೃಷ್ಟಿಸಲಾಗುತ್ತಿದೆ ಎಂದರು.

ನಾನು ಪ್ರಧಾನಿಯಾದ ಬಳಿಕ ಕಾಶ್ಮೀರಕ್ಕೆ ಹೋದೆ. ಅದು 10 ವರ್ಷಗಳ ಬಳಿಕ ದೇಶದ ಪ್ರಧಾನಿಯೊಬ್ಬರು ಕಾಶ್ಮೀರಕ್ಕೆ ಭೇಟಿ ನೀಡಿದ್ದ ಸಂದರ್ಭವಾಗಿತ್ತು. ಅಲ್ಲಿ ನನಗೆ ಅಧಿಕಾರಿಗಳು ನಿಮಗೆ ತೊಂದರೆಯಾಗುತ್ತದೆ ಎಂದು ಬುಲೆಟ್ ಪ್ರೂಫ್​ ಜಾಕೇಟ್ ಹಾಗೂ ಟೋಪಿಯನ್ನ ಕೊಟ್ಟರು. ಆಗ ನಾನು ಇವೆಲ್ಲ ಬೇಡ, ಹೇಗೆ ಬಂದಿದ್ದೇನೋ ಹಾಗೆಯೇ ಇರುತ್ತೇನೆ. ನಾನು ಸತ್ತು ಹೋದರೆ ನನ್ನ ಮೃತದೇಹವನ್ನ ಹರದನಹಳ್ಳಿಗೆ ಕಳುಹಿಸಿಕೊಡಿ ಎಂದು ಹೇಳಿದ್ದೆ. ಅಲ್ಲಿನ ಜನರ ಸಮಸ್ಯೆಯನ್ನ ಅಲಿಸಿ, ಬಗೆಹರಿಸುವ ಪ್ರಯತ್ನ ಮಾಡಿದ್ದೆ ಎಂದು ಹೇಳಿದರು……