Breaking News

ಶ್ರೀಲಂಕಾ ಸರಣಿ ಬ್ಲಾಸ್ಟ್​​ನಲ್ಲಿ ಕನ್ನಡಿಗರ ದುರ್ಮರಣ..!

ದಾಳಿ ಬಳಿಕ ಫೋನ್​ ಸಂಪರ್ಕಕ್ಕೆ ಸಿಗದ ಆರು ಮಂದಿ....

SHARE......LIKE......COMMENT......

ಶ್ರೀಲಂಕಾ:

ಶ್ರೀಲಂಕಾದಲ್ಲಿ ಈಸ್ಟರ್ ಹಬ್ಬದ ದಿನದಂದೇ 3 ಚರ್ಚ್​​ಗಳು ​, 3 ಹೋಟೆಲ್​ಗಳು​ ಹಾಗೂ ಸಾರ್ವಜನಿಕ ಸ್ಥಳಗಳೂ ಸೇರಿ ಒಟ್ಟು 8 ಕಡೆಗಳಲ್ಲಿ ಭಯೋತ್ಪಾದಕರು ಬಾಂಬ್​ ಬ್ಲಾಸ್ಟ್ ನಡೆಸಿದ್ದಾರೆ. ಆತ್ಮಾಹುತಿ ಬಾಂಬ್​​​​ ಸ್ಫೋಟದಲ್ಲಿ ಐವರು ಭಾರತೀಯರು, 27 ಮಂದಿ ವಿದೇಶೀಯರು ಸೇರಿದಂತೆ ಈವರೆಗೆ 217 ಮಂದಿ ಮೃತಪಟ್ಟಿದ್ದು, 500ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಮೃತಪಟ್ಟವರ ಪೈಕಿ ಭಾರತ, ಬ್ರಿಟಿಷ್, ಡಚ್‌ ಮತ್ತು ಅಮೆರಿಕನ್ ಪ್ರಜೆಗಳೂ ಸೇರಿದ್ದಾರೆ. ಇನ್ನು ಬಾಂಬ್​ ಬ್ಲಾಸ್ಟ್​ನಲ್ಲಿ ಕರ್ನಾಟಕದ ಇಬ್ಬರು ಮಹಿಳೆಯರು ಸಹ ಮೃತಪಟ್ಟಿದ್ದಾರೆ. ಘಟನೆಗೆ ಸಂಬಂಧಿಸಿದಂತೆ 13 ಮಂದಿ ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗ್ತಿದೆ.ಘಟನೆ ಹಿಂದೆ ತಾವೀದ್​ ಜಮಾತ್​ ಉಗ್ರ ಸಂಘಟನೆಯ ಕೈವಾಡವಿರೋ ಶಂಕೆ ವ್ಯಕ್ತವಾಗಿದೆ….