Breaking News

ಅ. 6 ರ ಮಂಗಳವಾರ ಧ್ರುವ ಸರ್ಜಾ 33ನೇ ವಸಂತಕ್ಕೆ ಕಾಲಿರಿಸಲಿದ್ದಾರೆ..!

ಆದರೆ, ಆಚರಣೆ ಬೇಡ ಎಂದು ಅಭಿಮಾನಿಗಳಿಗೆ ಮನವಿ....

SHARE......LIKE......COMMENT......

ಬೆಂಗಳೂರು:

ಕರೊನಾ ಸೇರಿ ಹಲವು ಕಾರಣಗಳಿಂದ ಸ್ಯಾಂಡಲ್​ವುಡ್​ ಮಂದಿ ತಂತಮ್ಮ ಜನ್ಮದಿನ ಆಚರಣೆಗೆ ಬ್ರೇಕ್​ ಹಾಕಿದ್ದರು. ಇದೀಗ ನಟ ಧ್ರುವ ಸರ್ಜಾ ಸಹ ಹುಟ್ಟುಹಬ್ಬದ ಆಚರಣೆ ಬೇಡ ಎಂದಿದ್ದಾರೆ. ಅ. 6 ರ ಮಂಗಳವಾರ ಧ್ರುವ ಸರ್ಜಾ 33ನೇ ವಸಂತಕ್ಕೆ ಕಾಲಿರಿಸಲಿದ್ದಾರೆ. ಆದರೆ, ಆ ಖುಷಿಯ ಕ್ಷಣವನ್ನು ಸಂಭ್ರಮಿಸಲು ಸರ್ಜಾ ಕುಟುಂಬ ಅಣಿಯಾಗಿಲ್ಲ. ಅಣ್ಣ ಚಿರಂಜೀವಿ ಸರ್ಜಾನನ್ನು ಕಳೆದುಕೊಂಡು ಒಬ್ಬಂಟಿಯಾಗಿರುವ ಧ್ರುವ, ಯಾವುದೇ ಆಚರಣೆ ಬೇಡ ಎಂದು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ಇದ್ದಲ್ಲಿಂದಲೇ ಶುಭಹಾರೈಸಿ ಎಂದಿದ್ದಾರೆ.

‘ಅಭಿಮಾನಿಗಳೇ ನಮ್ ಅನ್ನದಾತರು. ನೀವೇ ನಮ್ಮ ಶಕ್ತಿ. ಪ್ರತಿವರ್ಷ ಹುಟ್ಟುಹಬ್ಬಕ್ಕೆ ನೀವು ನಮ್ಮ ಮನೆಗೆ ಬಂದು ತೋರಿಸೋ ಪ್ರೀತಿ, ಅಭಿಮಾನ ವರ್ಣನಾತೀತ. ಈವರ್ಷದ ಎಲ್ಲಾ ಬೆಳವಣಿಗೆಗಳು ನಿಮಗೆ ಗೊತ್ತಿರೋದೇ. ಎಲ್ಲೂ ಸಂಭ್ರಮವಿಲ್ಲ. ಅಭಿಮಾನಿಗಳನ್ನು ಮನೆಯಬಳಿ ಬರಬೇಡಿ ಎನ್ನಲು ಮನಸ್ಸಿಲ್ಲ. ನೀವು ಇರುವ ಕಡೆಯಿಂದಲೇ ಹಾರೈಸಿ. ಅದೇ ನನಗೆ ಶ್ರೀರಕ್ಷೆ. ಜೈಆಂಜನೇಯ’ ಎಂದು ಟ್ವಿಟ್​ ಮಾಡಿದ್ದಾರೆ……