Breaking News

ಕುತಂತ್ರಿ ಚೀನಾಕ್ಕೆ ಪ್ರಧಾನಿ ಮೋದಿ ವಾರ್ನಿಂಗ್​​​​..!

ಸಂಧಾನ ಇಲ್ಲವೇ ಇಲ್ಲ..ಯೋಧರ ಬಲಿದಾನ ವ್ಯರ್ಥ ಆಗಲ್ಲ.....

SHARE......LIKE......COMMENT......

ನವದೆಹಲಿ:

ಲಡಾಖ್ ಗಡಿ ಪ್ರದೇಶದಲ್ಲಿ ನಡೆದ ಸಂಘರ್ಷದಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದಾರೆ ನಿಜ. ಶತ್ರುರಾಷ್ಟ್ರವನ್ನು ಅಷ್ಟಕ್ಕೆ ಭಾರತೀಯ ಸೈನಿಕರು ಸುಮ್ಮನೆ ಬಿಟ್ಟಿಲ್ಲ. ಬದಲಿಗೆ ದೇಶದ ಸೇನಾಶಕ್ತಿ ಎಂಥದ್ದು ಎನ್ನುವುದನ್ನು ಸರಿಯಾಗಿ ಮನದಟ್ಟು ಮಾಡುವಂತೆ ತೋರಿಸಿ ಕೊಟ್ಟಿದ್ದಾರೆ. ಭಾರತದ ಯಾವುದೇ ಪ್ರದೇಶವನ್ನು ಚೀನಾ ಸೇನೆಯು ಅತಿಕ್ರಮಣ ಮಾಡಿಕೊಂಡಿಲ್ಲ. ಅದಕ್ಕೆ ಭಾರತೀಯ ಸೇನೆಯು ಯಾವುದೇ ಕಾರಣಕ್ಕೂ ಅವಕಾಶವನ್ನೂ ನೀಡುವುದಿಲ್ಲ. ಈ ವಿಚಾರದಲ್ಲಿ ಕೇಂದ್ರ ಸರ್ಕಾರವು ಭಾರತೀಯ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಿದೆ. ಶತ್ರುಗಳನ್ನು ಎದುರಿಸಲು ಭಾರತೀಯ ಸೇನೆಯ ಸನ್ನದ್ಧವಾಗಿ ನಿಂತಿದೆ ಎಂದು ಪ್ರಧಾನಿ ಮೋದಿ ಚೀನಾಗೆ ಎಚ್ಚರಿಕೆ ಕೊಟ್ಟಿದ್ದಾರೆ.