ಬೆಂಗಳೂರು:
ಮಾಜಿ ಸಿಎಂ ಎಸ್ಎಂ ಕೃಷ್ಣ ತೀವ್ರ ಜ್ವರದ ಕಾರಣದಿಂದ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ಧಾರೆ. ಎಸ್.ಎಂ.ಕೃಷ್ಣ ಅವರು ಕಳೆದ ರಾತ್ರಿ 10.45ರ ಸುಮಾರಿಗೆ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದು, ಮೊದಲು ವೈದೇಹಿ ಆಸ್ಪತ್ರೆಗೆ ದಾಖಲಾಗಿದ್ದು, ಆನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ಧಾರೆ.
ಬೆಳಗ್ಗೆ 11 ಗಂಟೆ ಸುಮಾರಿಗೆ ಹೆಲ್ತ್ ಬುಲೆಟಿನ್ ರಿಲೀಸ್ ಸಾಧ್ಯತೆಗಳಿವೆ. ಹೆಲ್ತ್ ಬುಲೆಟಿನ್ ರಿಲೀಸ್ ಮಾಡಲು ಮಣಿಪಾಲ್ ವೈದ್ಯರ ಸಿದ್ಧತೆ ಮಾಡಿಕೊಂಡಿದ್ಧಾರೆ. ಸಚಿವ ಡಾ.ಸುಧಾಕರ್ ಎಸ್.ಎಂ.ಕೃಷ್ಣ ಆರೋಗ್ಯದ ಮಾಹಿತಿ ಪಡೆದಿದ್ಧಾರೆ. ಕೃಷ್ಣ ಅವರಿಗೆ ಸ್ವಲ್ಪ ಪ್ರಮಾಣದ ಉಸಿರಾಟ ಸಮಸ್ಯೆ ಇದೆ. ಶ್ವಾಸಕೋಶ ತಜ್ಞ ಡಾಕ್ಟರ್ ಸತ್ಯನಾರಾಯಣ ಮೈಸೂರು ತಂಡ ಟ್ರೀಟ್ ಮಾಡ್ತಿದೆ, ICU ಹೆಚ್ಓಡಿ ಸುನಿಲ್ ಕಾರಂತ್ ತಂಡವೂ ಚಿಕಿತ್ಸೆಗೆ ಸಾಥ್ ನೀಡಿದೆ. ಎಸ್ಎಂ ಕೃಷ್ಣ ಅವರಿಗೆ ಕನಿಷ್ಟ ಉಸಿರಾಟ ವ್ಯವಸ್ಥೆ ಮಾಡಲಾಗಿದೆ. ವೈದ್ಯರಿಂದ ಕ್ಷಣ-ಕ್ಷಣದ ಮಾಹಿತಿ ಪಡೆಯುತ್ತಿರುವೆ. ಎಸ್.ಎಂ.ಕೃಷ್ಣ ಲವಲವಿಕೆಯಿಂದಲೇ ಇದ್ದಾರೆ ಎಂದು ಮಾಹಿತಿ ನೀಡಿದ್ಧಾರೆ……