Breaking News

ಕೋಟ್ಯಧಿಪತಿ’ಯಲ್ಲಿ ಹಣ ಗೆಲ್ಲದೆ ಹೋದವರಿಗೆ ಚೆಕ್​ ಬರೆದುಕೊಡ್ತಿದ್ರು ಪುನೀತ್..!

ಪುನೀತ್​ ಇಷ್ಟೊಂದು ಸಹಾಯ ಮಾಡಿದ್ರಾ ಎಂದು ಅಚ್ಚರಿ....

SHARE......LIKE......COMMENT......

ಬೆಂಗಳೂರು:

ಪುನೀತ್​ ರಾಜ್​ಕುಮಾರ್​ ನಟನೆ ಜತೆಗೆ ಸಾಕಷ್ಟು ಸಾಮಾಜಿಕ ಕೆಲಸಗಳಲ್ಲೂ ತೊಡಗಿಕೊಂಡಿದ್ದರು. ಆದರೆ, ಅವರು ಮಾಡಿದ ಸಹಾಯವನ್ನು ಎಂದೂ, ಯಾರ ಬಳಿಯೂ ಹೇಳಿಕೊಂಡಿರಲಿಲ್ಲ. ಅವರು ನಿಧನ ಹೊಂದಿದ ಬಳಿಕ ಈ ವಿಚಾರಗಳು ಹೊರಗೆ ಬರುತ್ತಿವೆ. ಪುನೀತ್​ ಇಷ್ಟೊಂದು ಸಹಾಯ ಮಾಡಿದ್ರಾ ಎಂದು ಎಲ್ಲರೂ ಅಚ್ಚರಿಪಡುವಷ್ಟು ಒಳ್ಳೆಯ ಕೆಲಸಗಳನ್ನು ಅವರು ಮಾಡಿದ್ದಾರೆ. ಕಷ್ಟಗಳಿಗೆ ಅಂತ್ಯ ಹಾಡಬೇಕು ಎಂದು ‘ಕನ್ನಡದ ಕೋಟ್ಯಧಿಪತಿ’ ಆಡೋಕೆ ಬರುವವರು ಅನೇಕರಿದ್ದಾರೆ. ಇಲ್ಲಿಗೆ ಬಂದು ಹಣ ಗೆಲ್ಲೋಕೆ ಸಾಧ್ಯವಾಗದೆ ಇದ್ದರೆ ಅಂಥ ಸಂದರ್ಭದಲ್ಲಿ ಪುನೀತ್​ ಅವರೇ ಚೆಕ್​ ಬರೆದು ಕೊಟ್ಟ ಉದಾಹರಣೆ ಇದೆಯಂತೆ. ಈ ಬಗ್ಗೆ ಪುನೀತ್ ಮ್ಯಾನೇಜರ್​ ಆಗಿದ್ದ ವಜ್ರೇಶ್ವರಿ ಕುಮಾರ್ ಅವರು ಹಂಚಿಕೊಂಡ ವಿಚಾರಗಳು ಅನೇಕರಲ್ಲಿ ಅಚ್ಚರಿ ಮೂಡಿಸಿದೆ……