Breaking News

ರಣಮಳೆಗೆ ಮುಳುಗಿದ ಬೆಂಗಳೂರು..!

ಸತತ 4 ಗಂಟೆ ಕಾಲ ಅಬ್ಬರಿಸಿ ಬೊಬ್ಬಿರಿದ ವರುಣ....

SHARE......LIKE......COMMENT......

ಬೆಂಗಳೂರು:

ನಿನ್ನೆ ರಾತ್ರಿ ಸತತ 4 ಗಂಟೆ ಕಾಲ ಅಬ್ಬರಿಸಿ ಬೊಬ್ಬಿರಿದ ಮಳೆಗೆ ಬೆಂಗಳೂರು ಉತ್ತರ ಭಾಗಗಳಾದ ಟಿ.ದಾಸರಹಳ್ಳಿ, ವಿದ್ಯಾರಣ್ಯಪುರ, ಕೋಗಿಲು ಕ್ರಾಸ್, ಚಿಕ್ಕಬೊಮ್ಮಸಂದ್ರ, ಸೋಮೇಶ್ವರ ನಗರ,ಯಲಹಂಕ ಸುತ್ತಮುತ್ತ ಜಲಾವೃತವಾಗಿದೆ. ಇನ್ನು ಯಲಹಂಕ ಪೊಲೀಸ್ ಸ್ಟೇಷನ್-ಅಳ್ಳಾಲಸಂದ್ರ ರಸ್ತೆ ಜಲಾವೃತವಾಗಿದ್ದು ನೀರಿನಲ್ಲಿ ಸಿಲುಕಿ ನಡುರಸ್ತೆಯಲ್ಲೇ 25ಕ್ಕೂ ಹೆಚ್ಚು ಕಾರುಗಳು ಕೆಟ್ಟು ನಿಂತಿದೆ, ಇನ್ನು ಬೆಂಗಳೂರು ಉತ್ತರ ಭಾಗಗಳಾದ ಎಲ್ಲಾ ಭಾಗಗಳ ಮೇಲ್ಸೇತುವೆ ಕೆಳಗಿನ ರಸ್ತೆ ಜಲಾವೃತವಾಗಿದ್ದು ಜನರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ…..