Breaking News

ತಮ್ಮ ಮೇಲೆ ನಡೆದ ಹಲ್ಲೆ ಯತ್ನದ ಬಗ್ಗೆ ಸೇತುಪತಿ ಸ್ಪಷ್ಟನೆ..!

ಹಲ್ಲೆ ಬಗ್ಗೆ ವಿಜಯ್​ ಸೇತುಪತಿ ಪ್ರತಿಕ್ರಿಯೆ....

SHARE......LIKE......COMMENT......

ಬೆಂಗಳೂರು:

ತಮಿಳು ಚಿತ್ರರಂಗದ ಸ್ಟಾರ್ ನಟ(Star Hero), ಮಕ್ಕಳ್​ ಸೆಲ್ವನ್(Makkal Selvan)​ ವಿಜಯ್​ ಸೇತುಪತಿ(Vijay Sethupathi) ಮೇಲೆ ಕೆಲವು ದಿನಗಳ ಹಿಂದೆ ವ್ಯಕ್ತಿಯೊಬ್ಬ ಹಲ್ಲೆ ಯತ್ನ ನಡೆಸಿದ್ದ. ವಿಜಯ್ ಸೇತುಪತಿ ಕೆಲವು ದಿನಗಳ ಹಿಂದಷ್ಟೆ ಪುನೀತ್ ರಾಜ್‌ಕುಮಾರ್(Puneeth Rajkumar) ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ, ಮಾಧ್ಯಮಗಳೆದುರು ಪುನೀತ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದರು. ಅದರ ಹಿಂದಿನ ದಿನವಷ್ಟೆ ವಿಜಯ್ ಮೇಲೆ ಬೆಂಗಳೂರು(Bengaluru) ವಿಮಾನ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬ ಹಲ್ಲೆ ಮಾಡಿದ್ದ. ನಟ ವಿಜಯ್ ನವೆಂಬರ್ 02 ರಂದು ರಾತ್ರಿ, ವಿಮಾನದಲ್ಲಿ ಚೆನ್ನೈ(Chennai)ನಿಂದ ಬೆಂಗಳೂರಿಗೆ ಆಗಮಿಸಿದ್ದರು. ಈ ವೇಳೆ ಅವರೊಟ್ಟಿಗೆ ಸಹ ಪ್ರಯಾಣಿಕನೊಬ್ಬ(Co Passenger), ವಿಜಯ್ ಹಾಗೂ ಅವರ ಮ್ಯಾನೇಜರ್‌ ಜೊತೆ ಜಗಳವಾಡಿ, ವಿಜಯ್ ಸೇತುಪತಿ ವಿಮಾನ ನಿಲ್ದಾಣದಿಂದ ಹೊರಗೆ ಬರಬೇಕಾದರೆ ಹಲ್ಲೆ ಮಾಡಿದ್ದ. ಹಲ್ಲೆಗೆ ಯತ್ನಿಸಿದ್ದ ದೃಶ್ಯ ಮೊಬೈಲ್​ ಕ್ಯಾಮರಾವೊಂದರಲ್ಲಿ ಸೆರೆಯಾಗಿತ್ತು. ಸಖತ್​ ವೈರಲ್​ ಕೂಡ ಆಗಿತ್ತು. ಇದೀಗ ಆ ಹಲ್ಲೆ ಬಗ್ಗೆ ವಿಜಯ್​ ಸೇತುಪತಿ ಪ್ರತಿಕ್ರಿಯೆ ನೀಡಿದ್ದಾರೆ.

‘ಅದೊಂದು ಬಹಳ ಸಣ್ಣ ಘಟನೆ. ಆದರೆ ಅಲ್ಲಿದ್ದ ಯಾರೊ ಒಬ್ಬರು ಮೊಬೈಲ್‌ನಲ್ಲಿ ಅದನ್ನು ಸೆರೆಹಿಡಿದಿದ್ದರಿಂದ ಆ ವಿಷಯ ದೊಡ್ಡದಾಯಿತು. ಅದನ್ನು ಅಷ್ಟು ದೊಡ್ಡದು ಮಾಡುವ ಅವಶ್ಯಕತೆ ಇರಲಿಲ್ಲ’ ಅಂತ ವಿಜಯ್​ ಸೇತುಪತಿ ಹೇಳಿದ್ದಾರೆ. ಮೊಬೈಲ್‌ ಇದ್ದವರೆಲ್ಲ ಕ್ಯಾಮೆರಾಮನ್‌ಗಳಾಗಿದ್ದಾರೆ ಹಾಗಾಗಿ ಇಂಥಹಾ ಸಣ್ಣ ಘಟನೆಗಳಿಗೂ ಪ್ರಾಮುಖ್ಯತೆ ಸಿಗುತ್ತಿದೆ’ ಎಂದಿದ್ದಾರೆ ಸೇತುಪತಿ. ಸಹ ಪ್ರಯಾಣಿಕ ಕುಡಿದಿದ್ದ. ವ್ಯಕ್ತಿಯೊಬ್ಬ ತನ್ನ ನಿಯಂತ್ರಣದಲ್ಲಿ ಇಲ್ಲದೇ ಇದ್ದಾಗ ಆ ರೀತಿ ವರ್ತಿಸುತ್ತಾನೆ. ಆತ ನನ್ನ ಅಭಿಮಾನಿಯಲ್ಲ. ನನ್ನ ಅಭಿಮಾನಿಗಳು ದುರ್ವತನೆ ತೋರುವಂತವರಲ್ಲ. ಆತ ನಮ್ಮೊಂದಿಗೆ ವಿಮಾನದಲ್ಲಿ ಜಗಳ ಆರಂಭಿಸಿದ್ದ. ಅದು ವಿಮಾನ ಲ್ಯಾಂಡ್ ಆದ ಮೇಲೂ ಮುಂದುವರಿದಿತ್ತು. ನಾನು ಆತ ಕುಡಿದಿದ್ದಾನೆ ಎಂದು ಹೆಚ್ಚು ಗಮನ ಕೊಡಲಿಲ್ಲ. ಬಳಿಕ ಆ ವ್ಯಕ್ತಿ ಆ ರೀತಿ ಹಲ್ಲೆಗೆ ಯತ್ನಿಸಿದ್ದ ಎಂದು ಸೇತುಪತಿ ಹೇಳಿದ್ದಾರೆ.

‘ಜನರಿಂದ ದೂರ ಉಳಿದು ಸ್ಟಾರ್ ಎನಿಸಿಕೊಳ್ಳಲು ಇಷ್ಟವಿಲ್ಲ’

ವಿಜಯ್​ ಸೇತುಪತಿಗೆ ಪ್ರತ್ಯೇಕ ಭದ್ರತಾ ಸಿಬ್ಬಂದಿ ಯಾಕೆ ಇಲ್ಲಎಂದು ಪ್ರಶ್ನೆಸಿದ್ದಕ್ಕೆ, ‘ನನ್ನೊಂದಿಗೆ ನನ್ನ ಗೆಳೆಯ ಇರುತ್ತಾನೆ. ಮೂವತ್ತು ವರ್ಷಗಳಿಂದಲೂ ನಾವಿಬ್ಬರು ಗೆಳೆಯರು. ಈಗ ಅವನೇ ನನ್ನ ಮ್ಯಾನೇಜರ್. ನನ್ನ ಸುತ್ತಲೂ ಜನರರಿರುವುದು ನನಗೆ ಇಷ್ಟವಾಗುವುದಿಲ್ಲ. ನನಗೆ ಜನರೊಂದಿಗೆ ಬೆರೆಯುವುದು, ಮಾತನಾಡುವುದು ಇಷ್ಟ. ಜನರಿಂದ ದೂರ ಉಳಿದು ಸ್ಟಾರ್ ಎನಿಸಿಕೊಳ್ಳಲು ನನಗೆ ಇಷ್ಟವಿಲ್ಲ’ ಎಂದು ಉತ್ತರಿಸಿದ್ದಾರೆ. ‘ಯಾರಿಂದಲೂ ನನ್ನನ್ನು ರಕ್ಷಿಸುವ ಅಗತ್ಯವೂ ಇಲ್ಲ. ಜನರಿಗೆ ನೀವು ಪ್ರೀತಿ ತೋರಿಸಿದರೆ ಅವರು ಮರಳಿ ನಿಮ್ಮನ್ನು ಪ್ರೀತಿಸುತ್ತಾರೆ ಅಷ್ಟೆ’ ಎಂದಿದ್ದಾರೆ ಸೇತುಪತಿ.

ಸೆಲ್ಫಿ ಕೊಡದಿದ್ದಕ್ಕೆ ವ್ಯಕ್ತಿಯಿಂದ ಹಲ್ಲೆಗೆ ಯತ್ನ

ಕೇರಳ ಮೂಲದ ವ್ಯಕ್ತಿ ವಿಜಯ್ ಸೇತುಪತಿ ಮತ್ತು ಅವರ ಮ್ಯಾನೇಜರ್ ಮೇಲೆ ಹಲ್ಲೆಮಾಡಲು ಯತ್ನಿಸಿದ್ದ. ಆ ವ್ಯಕ್ತಿ ಬೆಂಗಳೂರಿನಲ್ಲಿ ವಾಸವಿದ್ದ. ನವೆಂಬರ್ 2ರ ರಾತ್ರಿ ವಿಮಾನ ನಿಲ್ದಾಣದಲ್ಲಿ ಆ ವ್ಯಕ್ತಿ ವಿಜಯ್ ಸೇತುಪತಿ ಅವರ ಜೊತೆಗೆ ಸೆಲ್ಫಿ ಕೇಳಿದ್ದನಂತೆ. ಆದರೆ ಆತ ಕುಡಿದಿರೋದು ಗೊತ್ತಾಗಿ ವಿಜಯ್‌ ಫೋಟೊ ಕೊಡಲು ನಿರಾಕರಿಸಿದ್ದಾರೆ. ಆಗ ವಿಜಯ್ ಸೇತುಪತಿ ಸಹಾಯಕ ಆ ವ್ಯಕ್ತಿಯನ್ನು ತಳ್ಳಿ ಮುಂದೆ ಸಾಗಿದ್ದಾನೆ. ಇದೇ ಕಾರಣಕ್ಕೆ ಕೋಪಗೊಂಡ ಆ ವ್ಯಕ್ತಿ ವಿಜಯ್‌ ಸೇತುಪತಿ ಸಹಾಯಕನ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ ಎನ್ನಲಾಗಿದೆ……