Breaking News

ಅಧಿಕೃತವಾಗಿ ಕೃಷಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ವಾಪಸ್..!

ಸಂಸತ್ತಿನ ಉಭಯ ಸದನಗಳಲ್ಲಿ ವಾಪಸ್ ಬಿಲ್​​​ಗೆ ಅನುಮೋದನೆ....

SHARE......LIKE......COMMENT......

ನವದೆಹಲಿ:

ನೂತನ ಕೃಷಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ಅಧಿಕೃತವಾಗಿ ವಾಪಸ್​ ಪಡೆದುಕೊಂಡಿದೆ. ಇವತ್ತು ಸಂಸತ್ತಿನ ಉಭಯ ಸದನಗಳಲ್ಲಿ ಕೃಷಿ ಕಾಯ್ದೆ ವಾಪಸ್​ ಪಡೆಯುವ ಬಿಲ್​​​ಗೆ ಅನುಮೋದನೆ ದೊರಕಿದೆ. ಲೋಕಸಭೆ ಮತ್ತು ರಾಜ್ಯಸಭೆಗಳು ಧ್ವನಿ ಮತದಿಂದ ಕೃಷಿ ಕಾಯ್ದೆ ವಾಪಸ್ ಪಡೆಯುವ ಮಸೂದೆಯನ್ನು ಪಾಸ್ ಮಾಡಿದವು. ಪ್ರಧಾನಿ ಮೋದಿ ಕೊಟ್ಟ ಮಾತಿನಂತೆ ಅಧಿವೇಶನದ ಮೊದಲ ದಿನವೇ ಕಾಯ್ದೆ ವಾಪಸ್​ ಬಿಲ್​​ ಮಂಡಿಸಿದ್ರು. ಕೃಷಿ ಸಚಿವರ ಪ್ರಸ್ತಾವಕ್ಕೆ ಸದನದ ಒಪ್ಪಿಗೆ ದೊರಕಿತು. ಇನ್ನು ರಾಜ್ಯಸಭೆಯಲ್ಲೂ ಕೃಷಿ ಸಚಿವ ನರೇಂದ್ರಸಿಂಗ್​ ಥೋಮರ್​​​​​ ಕಾಯ್ದೆ ವಾಪಸ್​ ಮಸೂದೆಯನ್ನು ಮಂಡಿಸಿ ಒಪ್ಪಿಗೆ ಪಡೆದರು. ಕಾಂಗ್ರೆಸ್​ ಸೇರಿದಂತೆ ಕೆಲ ವಿರೋಧ ಪಕ್ಷಗಳು ಕಾಯ್ದೆ ವಾಪಸ್​ ವಿಚಾರ ಚರ್ಚೆಗೆ ಅವಕಾಶ ನೀಡ್ಬೇಕು ಎಂದು ಆಗ್ರಹಿಸಿದವು.