Breaking News

ಕ್ರಿಪ್ಟೋ ಕರೆನ್ಸಿಯನ್ನ ಅಪಾಯಕಾರಿ ವ್ಯಕ್ತಿಗಳಿಂದ ತಪ್ಪಿಸೋದು ಆದ್ಯತೆ..!

ಡಿಜಿಟಲ್ ಕರೆನ್ಸಿಗಳ ಜಾಹೀರಾತು ನಿಲ್ಲಿಸುವ ಯೋಜನೆ ಇಲ್ಲ....

SHARE......LIKE......COMMENT......

ನವದೆಹಲಿ:

ಕ್ರಿಪ್ಟೋ ಕರೆನ್ಸಿ ವ್ಯವಹಾರವನ್ನ ಅಪಾಯಕಾರಿ ವ್ಯಕ್ತಿಗಳು ಕಂಟ್ರೋಲ್ ಮಾಡೋದನ್ನ ತಪ್ಪಿಸೋದು ನಮ್ಮ ಆದ್ಯತೆ ಅಂತಾ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಈ ಬಗ್ಗೆ ಸಂಸತ್ ಅಧಿವೇಶನದಲ್ಲಿ ಮಾತ್ನಾಡಿ, ಎಲ್ಲದಕ್ಕೂ ಕರಡು ಮಸೂದೆ ಸಿದ್ಧವಾಗೋವರೆಗೂ ಕಾಯೋಣ. ಈ ವ್ಯವಹಾರ ಕಾನೂನುಬದ್ಧ ಮಾಡ್ಬೇಕೋ? ಬೇಡವೋ? ಅನ್ನೋದ್ರ ಬಗ್ಗೆ ಸರ್ಕಾರ ಇನ್ನೂ ನಿರ್ಧರಿಸಿಲ್ಲ. ಆದ್ರೆ ಡಿಜಿಟಲ್ ಕರೆನ್ಸಿಗಳ ಕುರಿತಾದ ಜಾಹೀರಾತು ನಿಲ್ಲಿಸುವ ಯಾವ್ದೇ ಯೋಜನೆ ಸರ್ಕಾರದ ಮುಂದಿಲ್ಲ ಎಂದಿದ್ದಾರೆ ಸಚಿವೆ…..