Breaking News

ಯಲಹಂಕ ಸುತ್ತಮುತ್ತ ಕೆರೆಗಳು ಕೋಡಿ ಬಿದ್ದಿದೆ..!

ಬೆಂಗಳೂರಿನಲ್ಲಿ ಮಳೆರಾಯ ಭಾರೀ ಅವಾಂತರ....

SHARE......LIKE......COMMENT......

ಬೆಂಗಳೂರು:

ಬೆಂಗಳೂರಿನಲ್ಲಿ ಮಳೆರಾಯ ಭಾರೀ ಅವಾಂತರವನ್ನೇ ಸೃಷ್ಟಿಸಿದ್ದಾನೆ. ಯಲಹಂಕ ಸುತ್ತಮುತ್ತ ಬಿದ್ದ ಭಾರೀ ಮಳೆಗೆ ಕೆರೆ ಕೋಡಿ ಬಿದ್ದಿದೆ. ಪರಿಣಾಮ ಯಲಹಂಕದ ತಗ್ಗು ಪ್ರದೇಶಗಳಾದ ಕೋಗಿಲು ಸರ್ಕಲ್, ಸುರಭಿ ಲೇಔಟ್ ಮತ್ತು ಶಿವನಹಳ್ಳಿಗಳಿಗೆ ಅಪಾರದ ಪ್ರಮಾಣ ನೀರು ನುಗ್ಗಿದೆ. ಜಲಮಂಡಳಿಯ ಕೊಳಚೆ ನೀರು ಶುದ್ಧೀಕರಣ ಘಟಕದ ಇಳಿಜಾರು ರಸ್ತೆ ಮೂರು ಅಡಿ ನೀರಿನಿಂದ ತುಂಬಿ ಜಲಾವೃತವಾಗಿದೆ. ಸುರಭಿ ಲೇಔಟ್​ನ ಸುಮಾರು 40ಗುಡಿಸಲುಗಳಿಗೆ ನೀರು ನುಗ್ಗಿ ನೂರಾರು ಜನ ಕೂಲಿ ಕಾರ್ಮಿಕರು ಕಂಗಾಲಾಗಿದ್ದಾರೆ. ಹೊಟ್ಟೆಪಾಡಿಗಾಗಿ ಉತ್ತರ ಕರ್ನಾಟಕ, ಆಂಧ್ರ ಸೇರಿ ಹಲವೆಡೆಯಿಂದ ಬಂದಿರುವ ನೂರಾರು ಜನರು ಮಳೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ…..