Breaking News

ಯಾವ ರಾಶಿಗೆ ಶುಭ..? ಯಾವ ರಾಶಿಗೆ ಅಶುಭ..?

ನಿತ್ಯಭವಿಷ್ಯ ದಿನದ ಪಂಚಾಂಗ 8-10-2020

SHARE......LIKE......COMMENT......

ಪಂಚಾಂಗ:

ದಿನಾಂಕ: 08/10/2020ನೇ
ಶ್ರೀ ಶಾರ್ವರಿನಾಮ ಸಂವತ್ಸರ,
ದಕ್ಷಿಣಾಯನ ಪುಣ್ಯಕಾಲ,
ವರ್ಷ ಋತು, ಅಧಿಕ ಆಶ್ವಯುಜ ಮಾಸ
ಕೃಷ್ಣಪಕ್ಷ, ಷಷ್ಠೀ ತಿಥಿ ಗುರುವಾರ ಮೃಗಶಿರಾ ನಕ್ಷತ್ರ
ವರಿರ್ಯಾ ಯೋಗ, ವಣಿಕ್ ಕರಣ

ಅಮೃತಗಳಿಗೆ:

ಮಧ್ಯಾಹ್ನ 12:00 ರಿಂದ 01:30ಕ್ಕೆ

ಪ್ರಯಾಣಕ್ಕೆ ಅನುಕೂಲವಾದ ಯೋಗ(ಮೃತ್ಯು – ಮರಣ)

ರಾಹುಕಾಲ: ಮಧ್ಯಾಹ್ನ 01:40 ರಿಂದ 03:10
ಗುಳಿಕಕಾಲ: ಬೆಳಗ್ಗೆ 09:11 ರಿಂದ 10:41
ಯಮಗಂಡಕಾಲ: ಬೆಳಗ್ಗೆ 06:12 ರಿಂದ 07:41

ಮೇಷ:-
ಹಣಕಾಸಿನ ವ್ಯವಹಾರ ಸುಗಮವಾಗಲಿದೆ. ಅತೀ ಮುಖ್ಯವಾದ ಕೆಲಸಗಳ ಕಡೆ ಗಮನ ಕೊಡುವುದು ಒಳ್ಳೆಯದು. ಕೆಲಸ–ಕಾರ್ಯಗಳಿಗೆ ಸ್ಫೂರ್ತಿ ದೊರಕುವುದು. ದೂರದ ಪ್ರಯಾಣವನ್ನು ಮುಂದೂಡುವುದು ಒಳಿತು.

ವೃಷಭ:-
ನೀವು ಹಮ್ಮಿಕೊಂಡ ಕಾರ್ಯಗಳಲ್ಲಿ ಯಶಸ್ಸನ್ನು ಕಾಣುವಿರಿ. ಆರೋಗ್ಯದಲ್ಲಿ ವ್ಯತ್ಯಾಸ, ಮಾನಸಿಕ ಕಿರಿಕಿರಿ, ವಸ್ತ್ರಾಭರಣ ವ್ಯಾಪಾರಸ್ಥರಿಗೆ ಅನುಕೂಲ.

ಮಿಥುನ:-
ಮಾಡುವ ಕೆಲಸ ಕಾರ್ಯಗಳಲ್ಲಿ ಅವಸರ ಬೇಡ. ಹಿರಿಯರ ಸಲಹೆಯನ್ನು ಯಾವುದೇ ಕಾರಣಕ್ಕೂ ತಿರಸ್ಕರಿಸಬೇಡಿ. ಶುಭ ಕಾರ್ಯಗಳಿಗೆ ಖರ್ಚುಗಳು ಹೆಚ್ಚು ಇರುತ್ತೆ, ಕೆಲಸ ಕಾರ್ಯಗಳಲ್ಲಿ ವಿಘ್ನ.

ಕಟಕ:-
ವ್ಯಾಪಾರಿಗಳಿಗೆ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದು. ಮಕ್ಕಳಿಂದ ನೆಮ್ಮದಿ ಕಾಣುವಿರಿ. ಯಾರದೋ ಮೇಲಿನ ಕೋಪವನ್ನು ಮತ್ತಾರದೋ ಮೇಲೆ
ತೋರಿಸಿವಿರಿ.

ಸಿಂಹ:-
ದೂರ ಪ್ರಯಾಣಕ್ಕೆ ಸಾಕಷ್ಟು ಸಿದ್ಧತೆ ಮಾಡಿಕೊಳ್ಳುವಿರಿ. ಮನೆಯಲ್ಲಿ ವಿಶೇಷ ಧಾರ್ಮಿಕ ಕಾರ್ಯಗಳು ನಡೆಯುವವು. ಸಂಧಿವಾತಕ್ಕೆ ಸಂಬಂಧಿಸಿದಂತೆ ಬೆನ್ನು, ಕತ್ತುಗಳಲ್ಲಿ ನೋವು ಕಾಣಿಸಿಕೊಳ್ಳುವುದು.

ಕನ್ಯಾ:-
ಹಳೆ ಮನೆ ನವೀಕರಣ ಅಥವಾ ಹೊಸಮನೆ ನಿರ್ಮಾಣಕ್ಕೆ ಹೆಚ್ಚು ಹಣ ಖರ್ಚು. ಕುಟುಂಬದಲ್ಲಿ ಮನಃಸ್ತಾಪ ಉಂಟಾಗುವುದು,ಮನೆಯಲ್ಲಿ ಮಂಗಳ ಕಾರ್ಯಗಳು ನಡೆಯುವ ಸಾಧ್ಯತೆ ಇರುವುದು.

ತುಲಾ:-
ಹೊಸ ಯೋಜನೆಗಳಿಗೆ ಮಾತುಕತೆ ನಡೆಸುವಿರಿ.
ವಿವಿಧ ಮೂಲಗಳಿಂದ ಹಣ ಬರುವ ಸಾಧ್ಯತೆ ಇದೆ. ಪಿತೃವರ್ಗದವರಿಂದ ಹೆಚ್ಚಿನ ಅನುಕೂಲ ಇದೆ.

ವೃಶ್ಚಿಕ:-
ಬರಬೇಕಾಗಿರುವ ಬಾಕಿ ಹಣವನ್ನು ನಂಬಿಕೊಂಡು ಯಾವುದೇ ಹೊಸ ಯೋಜನೆಗಳನ್ನು ಹಮ್ಮಿಕೊಳ್ಳುವುದು ಒಳ್ಳೆಯದಲ್ಲ.
ನೀವು ಹಮ್ಮಿಕೊಂಡ ಕೆಲಸ ಕಾರ್ಯಗಳಲ್ಲಿ ಅಲ್ಪ ಹಿನ್ನಡೆ ಕಾಣುವಿರಿ. ಗೃಹ ಸಮಸ್ಯೆಗೆ ಪರಿಹಾರ ಸಿಗಲಿದೆ.

ಧನುಸ್ಸು:-
ಹಣಕಾಸಿನ ಕುರಿತು ಗಮನವಿರಲಿ. ಸುಮ್ಮನೆ ಖರ್ಚಿನ ದಾರಿ ಬೆಳೆಯುತ್ತಾ ಹೋಗುತ್ತದೆ. ಬಹುದಿನಗಳಿಂದ ಬಾಕಿ ಇರುವ ಕೆಲಸ–ಕಾರ್ಯಗಳು ಇಂದು ವಿಳಂಬವಿಲ್ಲದೆ ನೆರವೇರುವ ಸಾಧ್ಯತೆ. ಪ್ರಯಾಣದಲ್ಲಿ ಎಚ್ಚರವಿರಲಿ.

ಮಕರ:-
ವ್ಯವಹಾರದಲ್ಲಿ ಹಿನ್ನಡೆಯನ್ನು ಅನುಭವಿಸಲಿದ್ದೀರಿ. ಬೇರೆಯವರ ಸಲಹೆಯಿಂದಾಗಿ ಅಪಾಯದಲ್ಲಿ ಸಿಲುಕಿಕೊಳ್ಳುವ ಸಾಧ್ಯತೆ. ಕೆಲವರಿಗೆ ಸ್ಥಳ ಬದಲಾವಣೆಯ ಸಾಧ್ಯತೆ ಇದೆ.

ಕುಂಭ
ದಿಢೀರಾಗಿ ಅನೇಕ ಸಮಸ್ಯೆಗಳು ಎದುರಾಗುವ ಸಂಭವವಿರುತ್ತದೆ. ವಿದೇಶದಿಂದ ಬರುವ ಸುದ್ದಿಯು ನಿಮಗೆ ಸಂತಸವನ್ನುಂಟು ಮಾಡುತ್ತದೆ. ಇಚ್ಛಿತ ಕಾರ್ಯಗಳು ಕೈಗೂಡುವುದು.

ಮೀನ:-
ಪಿತ್ರಾರ್ಜಿತ ಆಸ್ತಿಗೆ ಸಂಬಂಧಪಟ್ಟಂತೆ ಮಾತುಕತೆ ಅಥವಾ ಕಲಹಗಳು ಉಂಟಾಗುವುದು ,ಮಕ್ಕಳಿಂದ ಕಿರಿಕಿರಿ ಅನುಭವಿಸುವಿರಿ. ವೃತ್ತಿಯಲ್ಲಿ ಬದಲಾವಣೆ ಮಾಡುವ ಸಾಧ್ಯತೆ.