Breaking News

ಶುಕ್ರನ ಈ ಬದಲಾವಣೆಯಿಂದ 5 ರಾಶಿಯವರಿಗೆ ಅದೃಷ್ಟ..!

ಮೇ 23 ರಿಂದ ಬೆಳಗಲಿದೆ ಈ ಐದು ರಾಶಿಯವರ ಅದೃಷ್ಟ....

SHARE......LIKE......COMMENT......

ಧಾರ್ಮಿಕ ಪರಂಪರೆ:

ಶುಕ್ರ ರಾಶಿ ಪರಿವರ್ತನೆ ಪರಿಣಾಮ:

ಶುಕ್ರ ಗ್ರಹವನ್ನು ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗಿದೆ. ಶುಕ್ರನು ರಾಶಿಯನ್ನು ಬದಲಾಯಿಸಿದಾಗ, ಅದು ಎಲ್ಲಾ 12 ರಾಶಿಚಕ್ರದ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ. ರಾಶಿಚಕ್ರದ ಈ ಬದಲಾವಣೆಯಿಂದಾಗಿ ಹಲವು ರಾಶಿಯವರಿಗೆ ಅದೃಷ್ಟವೇ ಬದಲಾಗುತ್ತದೆ. ಹಲವರ ಜೀವನದಲ್ಲಿ ಮಹತ್ವದ ಬದಲಾವಣೆಗಳ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತದೆ. ಈ ಬಾರಿ ಶುಕ್ರನು ಮೇ 23 ರಂದು ಮೀನ ರಾಶಿಯಿಂದ ಮೇಷ ರಾಶಿಗೆ ಪ್ರವೇಶಿಸಲಿದ್ದಾನೆ. ಈ ಸಂಕ್ರಮಣದಿಂದ ಯಾವ ರಾಶಿಯವರಿಗೆ ಅದೃಷ್ಟ, ಇದರಿಂದ ಯಾವ ರಾಶಿಯವರು ತಾಯಿ ಲಕ್ಷ್ಮಿ ಕೃಪೆಗೆ ಪಾತ್ರರಾಗಲಿದ್ದಾರೆ ಎಂದು ತಿಳಿಯೋಣ.

ಈ ರಾಶಿಯವರ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ:

ಮೇಷ ರಾಶಿ:

ಮೇಷ ರಾಶಿಗೆ ಶುಕ್ರನ ಪ್ರವೇಶದಿಂದಾಗಿ ಈ ರಾಶಿಯವರಿಗೆ ಲಕ್ಷ್ಮಿಯ ಕೃಪೆಯಿಂದ ಜೀವನ ಸುಖಮಯವಾಗಲಿದೆ. ಆರ್ಥಿಕ ಭಾಗವು ಬಲವಾಗಿರುತ್ತದೆ. ಹೂಡಿಕೆಯಿಂದ ಲಾಭವಾಗಲಿದೆ. ಖರ್ಚು ಕಡಿಮೆಯಾಗಲಿದೆ. ವಹಿವಾಟುಗಳಿಗೆ ಈ ತಿಂಗಳು ತುಂಬಾ ಅನುಕೂಲಕರವಾಗಿರುತ್ತದೆ. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ.

ಧನು ರಾಶಿ:

ಶುಕ್ರ ರಾಶಿ ಪರಿವರ್ತನೆಯಿಂದಾಗಿ ಧನು ರಾಶಿಯವರಿಗೆ ವ್ಯಾಪಾರ- ವಹಿವಾಟುಗಳಿಗೂ ಸಮಯ ಉತ್ತಮವಾಗಿದೆ. ಲಕ್ಷ್ಮಿಯ ಕೃಪೆ ಇರುತ್ತದೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಹೂಡಿಕೆ ಮಾಡಲು ಉತ್ತಮ ಸಮಯ. ಆದಾಯದ ಮೂಲಗಳು ಹೆಚ್ಚಾಗುತ್ತವೆ. ಹೊಸ ವಾಹನ ಖರೀದಿಸಬಹುದು.

ಈ ರಾಶಿಯವರಿಗೆ ಹೊಸ ವಾಹನ – ಮನೆ ಖರೀದಿಸುವ ಯೋಗ:

ಮಿಥುನ ರಾಶಿ:

ಮೇಷ ರಾಶಿಗೆ ಶುಕ್ರನ ಪ್ರವೇಶವು ಮಿಥುನ ರಾಶಿಯವರಿಗೆ ಅದೃಷ್ಟವನ್ನು ಹೊತ್ತು ತರಲಿದೆ. ವ್ಯಾಪಾರ- ವಹಿವಾಟುಗಳಿಗೆ ಸಮಯವು ಮಂಗಳಕರವಾಗಿದೆ, ಆದರೆ ವ್ಯವಹಾರಗಳನ್ನು ಮಾಡುವ ಮೊದಲು ಎಚ್ಚರಿಕೆಯಿಂದ ಯೋಚಿಸಿ ನಿರ್ಧಾರ ಕೈಗೊಳ್ಳಿ. ಈ ಸಮಯದಲ್ಲಿ ಈ ರಾಶಿಯವರ ಮೇಲೆ ಮಾತೆ ಲಕ್ಷ್ಮಿಯ ವಿಶೇಷ ಕೃಪೆ ಇರುತ್ತದೆ. ಹಣಕಾಸಿನ ಪರಿಸ್ಥಿತಿಯು ಹೆಚ್ಚು ಉತ್ತಮವಾಗಲಿದೆ. ಹೊಸ ಕೆಲಸವನ್ನು ಪ್ರಾರಂಭಿಸಲು ಉತ್ತಮ ಸಮಯ. ಹೊಸ ಮನೆ ಅಥವಾ ವಾಹನ ಖರೀದಿಸುವ ಯೋಗವೂ ಇದೆ.

ಈ ರಾಶಿ ಚಕ್ರದವರಿಗೆ ವ್ಯವಹಾರಕ್ಕೆ ಉತ್ತಮ ಸಮಯ:

ವೃಶ್ಚಿಕ ರಾಶಿ:

ವಹಿವಾಟುಗಳಿಗೆ ಸಮಯವು ಮಂಗಳಕರವಾಗಿರುತ್ತದೆ. ಲಕ್ಷ್ಮಿಯ ಕೃಪೆಯಿಂದ ನಿಮ್ಮ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ವ್ಯಾಪಾರಕ್ಕೆ ಈ ಸಮಯವು ತುಂಬಾ ಅನುಕೂಲಕರವಾಗಿದೆ. ಹಣದ ಲಾಭ ಇರುತ್ತದೆ. ಆದರೆ ಈ ವರ್ಷ ನಿಮ್ಮ ಖರ್ಚುಗಳನ್ನು ನೀವು ನಿಯಂತ್ರಿಸಬೇಕಾಗುತ್ತದೆ. ನೀವು ಹೊಸ ಮನೆ ಅಥವಾ ವಾಹನವನ್ನು ಖರೀದಿಸಬಹುದು.

ಕುಂಭ ರಾಶಿ:

ತಾಯಿ ಲಕ್ಷ್ಮಿಯ ವಿಶೇಷ ಆಶೀರ್ವಾದವನ್ನು ನೀವು ಪಡೆಯುತ್ತೀರಿ. ವ್ಯಾಪಾರ ವರ್ಗದವರಿಗೆ ಈ ಸಮಯ ವರದಾನಕ್ಕಿಂತ ಕಡಿಮೆಯೇನಲ್ಲ. ಹೂಡಿಕೆ ಮಾಡಲು ಸಾಕಷ್ಟು ಅವಕಾಶಗಳಿವೆ. ಹೊಸ ವಾಹನ ಅಥವಾ ಮನೆ ಖರೀದಿಗೆ ಸಮಯ ಅನುಕೂಲಕರವಾಗಿದೆ. ಈ ಸಮಯದಲ್ಲಿ ವಿತ್ತೀಯ ಲಾಭವಿದೆ, ಆದರೆ ಖರ್ಚುಗಳನ್ನು ಕಡಿಮೆ ಮಾಡಲು ಪ್ರಯತ್ನಿಸಿ……