Breaking News

ಸೂರ್ಯಗ್ರಹಣ ನೋಡುವ ದುಸ್ಸಾಹಸ ಮಾಡಬೇಡಿ..!

ಬರಿಗಣ್ಣಿನಿಂದ ನೋಡುವುದು ಕಣ್ಣಿಗೆ ಅಪಾಯಕಾರಿ....

SHARE......LIKE......COMMENT......

ಬೆಂಗಳೂರು:

ಭಾನುವಾರ ಬೆಳಗ್ಗೆ 10.12ಕ್ಕೆ ಆರಂಭಗೊಂಡು ಮಧ್ಯಾಹ್ನ 1.30ಕ್ಕೆ ಕೊನೆಗೊಳ್ಳುವ ಶತಮಾನದ ಮೊದಲ ಸೂರ್ಯಗ್ರಹಣ ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಭಾಗಗಳಲ್ಲಿ ಗೋಚರಿಸಲಿದೆ. ಆದರೆ, ಯಾವ ಕಾರಣಕ್ಕೂ ಬರಿಗಣ್ಣಿನಿಂದ ನೋಡುವ ಸಾಹಸ ಮಾಡಬೇಡಿ ಎಂದು ಎಚ್ಚರಿಕೆ ನೀಡಲಾಗಿದೆ. ಕರ್ನಾಟಕದಲ್ಲಿ ಶೇ.40-45ರಷ್ಟು ಮಾತ್ರ ಗೋಚರವಾಗುತ್ತದೆ. ಅದರಲ್ಲೂ ದಕ್ಷಿಣ ಕರ್ನಾಟಕದಲ್ಲಿ ಕಡಿಮೆ ಪ್ರಮಾಣದಲ್ಲಿದ್ದು, ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಪ್ರಮಾಣದಲ್ಲಿ ಕಂಡುಬರುತ್ತದೆ. ಬೀದರ್‌, ಬೆಳಗಾವಿ ಮತ್ತಿತರ ಭಾಗಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗೋಚರಿಸಲಿದೆ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಖಜಾಂಚಿ ಇ. ಬಸವರಾಜು ತಿಳಿಸಿದ್ದಾರೆ.

ಗ್ರಹಣವನ್ನು ಬರಿಗಣ್ಣಿನಿಂದ ನೋಡುವುದು ಕಣ್ಣಿಗೆ ಅಪಾಯಕಾರಿ. ಬದಲಿಗೆ ಸೋಲಾರ್‌ ಕನ್ನಡಕ ಮತ್ತು ವೆಲ್ಡರ್‌ ಗ್ಲಾಸ್‌-14 ಗಳನ್ನು ಬಳಸಿ ನೋಡುವುದು ಕಣ್ಣಿಗೆ ಸುರಕ್ಷಿತ. ಸೋಲಾರ್‌ ಕನ್ನಡಕ ಬಳಸಿ ನೋಡುವುದರಿಂದ ಸೂರ್ಯನ ಪ್ರಖರತೆ ಕಡಿಮೆಯಿರುತ್ತದೆ. ಹೀಗಾಗಿ ಕಣ್ಣಿಗೆ ಯಾವುದೇ ಹಾನಿಯಾಗುವುದಿಲ್ಲ ಎಂದು ಖಗೋಳ ವಿಜ್ಞಾನಿಗಳು ಸಲಹೆ ನೀಡಿದ್ದಾರೆ……